Slide
Slide
Slide
previous arrow
next arrow

ಪತ್ರಕರ್ತರ ಮೇಲೆ ದರ್ಪ ತೋರಿದ ಸಿಪಿಐ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

300x250 AD

ಯಲ್ಲಾಪುರ : ದಾಂಡೇಲಿಯ ಪತ್ರಕರ್ತರ ಮೇಲೆ ದರ್ಪ ತೋರಿದ ಸಿಪಿಐ ಭೀಮಣ್ಣ ಸೂರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುರುವಾರ ಯಲ್ಲಾಪುರದಲ್ಲಿ ಪತ್ರಿಕಾ ವಿತರಕರ ಸಂಘದಿಂದ ತಹಶೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ದಾಂಡೇಲಿಯ ಎ.ಪಿ.ಜೆ. ಅಬ್ದುಲ್‌ ಕಲಾಂ ವಸತಿ ನಿಲಯದ ಪ್ರಾಚಾರ್ಯರ ವಿರುದ್ಧ ಅದೇ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿರುವ ವೇಳೆ ಅ.27 ರಂದು ದಾಂಡೇಲಿಯ ಸಿ.ಪಿ.ಐ. ಭೀಮಣ್ಣ ಸೂರಿಯವರು ಪತ್ರಕರ್ತರ ಜೊತೆ ದರ್ಪದಿಂದ ಹಾಗೂ ಅನುಚಿತವಾಗಿ ನಡೆದುಕೊಂಡಿರುವುದನ್ನು ಪತ್ರಿಕಾ ವಿತರಕರ ಸಂಘ ದಿಂದ ನಾವೆಲ್ಲ ತೀವ್ರವಾಗಿ ಖಂಡಿಸುತ್ತೇವೆ. ಪತ್ರಕರ್ತರ ಮೇಲೆ ದಬ್ಬಾಳಿಕೆ ನಡೆಸಿದ ಸಿ.ಪಿ.ಐ. ಭೀಮಣ್ಣ ಸೂರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಈ ಮೂಲಕ ಆಗ್ರಹಿಸುತ್ತೇವೆ ಎಂದು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಅಶೋಕ್‌ ಭಟ್‌ ಜಿಲ್ಲಾಧಿಕಾರಿಗಳಿಗೆ ಪತ್ರ ತಲುಪಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಜಯರಾಜ್‌ ಗೋವಿ, ತಾಲೂಕಾಧ್ಯಕ್ಷ ಅನಿಲ ಭಟ್,ಉಪಾಧ್ಯಕ್ಷ ಅಮೃತ ಹೇಂದ್ರೆ, ಕಾರ್ಯ ದರ್ಶಿ ರಾಜು ಉಡುಪಿಕರ್,ಸದಸ್ಯರಾದ ದೀಪಕ ಕಲಾಲ್‌, , ಅಭಿ ಕಲಾಲ್‌, ರಾಕೇಶ್‌ ಹಾಗೂ ಪ್ರಭಾ ಜಯರಾಜ್‌ ಇದ್ದರು.

300x250 AD
Share This
300x250 AD
300x250 AD
300x250 AD
Back to top